ಆಳ್ವಾಸ್ ವಿರಾಸತ್ 2012 ಕ್ಕೆ ಅದ್ಧೂರಿ ಚಾಲನೆ
Friday, January 6th, 2012 - editor - 0 Commentಮೂಡಬಿದಿರೆ,ಜನವರಿ 05: ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಆಶ್ರಯದಲ್ಲಿ ಮಿಜಾರು ಶೋಭಾವನದಲ್ಲಿ ನಾಲ್ಕು ದಿನಗಳ ಕಾಲ ನಡೆಯಲಿರುವ ಆಳ್ವಾಸ್ ವಿರಾಸತ್ 2012 ಕ್ಕೆ ಶ್ರೀಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ರಾಜರ್ಷಿ ಡಾ.ಡಿ.ವಿರೇಂದ್ರ ಹೆಗ್ಗಡೆಯವರು ದೀಪ ಬೆಳಗಿಸುವುದರ ಮೂಲಕ ಉದ್ಘಾಟಿಸಿದರು. ನಂತರ ಮಾತನಾಡಿದ ಅವರು ಸಾತ್ವಿಕ ಭಾವದಿಂದ ಜೀವಿಸಬೇಕು ಎನ್ನುವುದು ಎಲ್ಲ ಧರ್ಮಗಳಲ್ಲಿ ಅಡಕವಾಗಿರುವ ತತ್ವ. ಅದನ್ನು ಸಾಧಿಸಲು ನಾವು ಅನೇಕ ರೀತಿಯಲ್ಲಿ ಪ್ರಯತ್ನಿಸುತ್ತೇವೆ. ಇಂತಹ ಪ್ರಯತ್ನಗಳ ಮೂಲಕ ಭಗವಂತನ ಸಾಮೀಪ್ಯ ಪಡೆಯಲು ಸಾಧ್ಯ. ನಿಷ್ಕಲ್ಮಶ ಬದುಕು ನಮ್ಮದಾಬೇಕಾದರೆ ಸುಮನಸ್ಸು ಮುಖ್ಯ. [...]











